Select Page

Date: September 10, 2021

ವಿಶ್ವ ಆತ್ಮಹತ್ಯೆ ತಡೆ ದಿನ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ, ಕಮಲ್ ಎ.ಬಾಳಿಗಾ ಚಾರೀಟೇಬಲ್ ಟ್ರಸ್ಟ್, ಮುಂಬಾಯಿ, ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ರೋಟರಿ ಕ್ಲಬ್ ಮಣಿಪಾಲ, ಇವರ ಸಂಯುಕ್ತ ಆಶ್ರಯದಲ್ಲಿ, ದಿನಾಂಕ ೧೦.೦೯.೨೦೨೧ ರಂದು, ಆತ್ಮಹತ್ಯೆ ತಡೆ ದಿನವನ್ನು ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉಡುಪಿ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ. ಶರ್ಮಿಳಾ ಆರ್.ರವರು ಉದ್ಘಾಟಿಸಿದರು ತಮ್ಮ ಉದ್ಘಾಟನ ಭಾಷಣದಲ್ಲಿ  ಯಾರೇ ಅದರೂ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಮ್ಮ ಹತ್ತಿರದವರ ಬಳಿ ಆತ್ಮಹತ್ಯೆ ಆಲೋಚನೆ ಬಗ್ಗೆ ಕೆಲವೊಂದು ಸುಳಿವನ್ನು ನೀಡಿರುತ್ತಾರೆ ಅಂತಹ ಸಂದರ್ಭದಲ್ಲಿ ಮನೆಯವರು ತಕ್ಷಣ ತಜ್ಞರ ನೆರವನ್ನು ಪಡೆಯುವ ಮೂಲಕ ಅಥವಾ ವ್ಯಕ್ತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಮೂಲಕ ಅವರು ಆತ್ಮ ಹತ್ಯೆ ಯೋಚನೆಯಿಂದ ದೂರವಾಗುವಂತೆ ಮಾಡಬೇಕು. ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ, ಶಾಂತಚಿತ್ತವಾಗಿ ಕುಳಿತು ಯೋಚಿಸಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು  ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ. ಪಿ.ವಿ.ಭಂಡಾರಿಯವರು ವಹಿಸಿದರು, ಮುಖ್ಯ ಆತಿಥಿಗಳಾಗಿ. ಶ್ರೀ. ಬೆಂಜಮಿನ್ , ನಿವೃತ್ತ ಮನೋವೈದ್ಯಕೀಯ ಶುಶ್ರೂಷಕರು ಐರ್ಲೆಂಡ್ ಇವರು ಭಾಗವಹಿಸಿದರು, ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ, ಆಡಳಿತಾಧಿಕಾರಿಣಿಯಾದ ಶ್ರೀಮತಿ . ಸೌಜನ್ಯ ಕೆ. ಶೆಟ್ಟಿಯವರು ಸ್ವಾಗತಿಸಿದರು, ಸಂಸ್ಥೆಯ ಆಪ್ತಸಮಾಲೋಚರಾದ ಶ್ರೀ. ಲೋಹಿತ್. ಕೆ ವಂದಿಸಿದರು, ಕು. ಸುಚಿತ್ರ ಕಾರ್ಯಕ್ರಮವನ್ನು ನಿರೂಪಿಸಿದರು.