Select Page

Date: October 10, 2022

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಮತ್ತು ಬಾಳಿಗಾ ಸಮೂಹ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆದ ನರ್ಸಿಂಗ್ ವಿದ್ಯಾರ್ಥಿನಿಗಳಿಗೆ ಅರಿವು ಕಾರ್ಯಕ್ರಮ. ಖಿನ್ನತೆ, ಆತಂಕ, ಒತ್ತಡ ನಿರ್ವಹಣೆ, ಆತ್ಮಹತ್ಯಾ ಪ್ರವೃತ್ತಿ ಈ ಬಗ್ಗೆ ಕಾರ್ಯಕ್ರಮಗಳು. ಯುವ ಮನೋವೈದ್ಯರುಗಳು ಡಾ. ಮಾನಸ್, ಡಾ. ದೀಪಕ್ ಮಲ್ಯ, ಡಾ. ಮನು ಆನಂದ್ ಮತ್ತು ಡಾ. ಸೌಧಾಮಿನಿ ಇವರುಗಳು ಮಾತನಾಡಿದರು.
ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ನ್ಯಾಯಾಧೀಶೆ ಮತ್ತು ಸದಸ್ಯ ಕಾರ್ಯದರ್ಶಿ ಶ್ರೀಮತಿ ಶರ್ಮಿಳಾ ಎಸ್ ಕಾರ್ಯಕ್ರಮ ಉದ್ಘಾಟಿಸಿದರು ಹಾಗು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶ್ರೀ ನಾಗಭೂಷಣ್ ಉಡುಪ ಮತ್ತು ಜಿಲ್ಲಾ ಮಾನಸಿಕ ಅರೋಗ್ಯ ಅನುಷ್ಠಾನ ಅಧಿಕಾರಿ ಶ್ರೀಮತಿ ಲತಾ ನಾಯಕ್ ಉಪಸ್ಥಿತರಿದ್ದರು.